Wednesday, 6 August 2014


ಪ್ರತಿಭಾ ಪುರಸ್ಕಾರ ಕಾಯ೯ಕ್ರಮ.
ಕಾಸರಗೋಡು:ಬಿ..ಯಂ.ಹೈಯರ್ ಸೆಕೆಂಡರಿ ಶಾಲೆಯನ್ನಿ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಎಸ್.ಎಸ್. ಎಲ್.ಸಿ. ಯಲ್ಲಿ ಉನ್ನತ ಅಂಕ ಗಳಿಸಿದ ವಿಧ್ಯಾಥ೯ಗಳಿಗೆ ಸನ್ಮಾನ ಹಾಗೂ ನಗದು ಬಹುಮಾನ ವಿತರಣೆ ಇತ್ತೀಚೆಗೆ ಜರಗಿತು. ಅದೇ ವೇಳೆ ಶಾಲೆಯ ಪೂವ೯ ವಿದ್ಯಾಥಿ೯ಗಳಾದ ಶ್ರೀ ಅಶೋಕಕಿಣಿ ಮತ್ತು ಗಣೇಶ್ ರಾಜ್-ISRO ಬೆಂಗಳೂರು ಅವರು ನೀಡಿದ ನಗದು ಬಹುಮಾನವನ್ನು ಕಳೆದ ಮಾಚ್೯ 2014ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾಥಿ೯ಗಳಿಗೆ ನೀಡಲಾಯಿತ್ತು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಸಿ..ಸುಮಿತ್ರ ಅವರ ವತಿಯಿಂದ ಉತ್ತಮ ಸಾಧಲೆಗೈದ SC-STವಿಭಾಗದ ಇಬ್ಬರು ವಿದ್ಯಾಥಿ೯ಗಳಿಗೆ ನಗದು ಬಹುಮಾನ ಕೊಡಲಾಯಿತು. ಇದೇ ವೇಳೆ ಜೋಸೆಫ್ ಚಾಂಡಿ ಸ್ಮರಣಾಥ೯ ಇಂಡಿಯಾ ಜೀವಕಾರುಣ್ಯ ಟ್ರಸ್ಟ್ ಅವರು ನೀಡಿದ ನಗದು ಬಹುಮಾನವನ್ನು ಕಲಿಕೆಯಲ್ಲಿ ಮುಂದಿರುವ ಬಡವಿದ್ಯಾಥಿ೯ಗಳಿಗೆ ವಿತರಿಸಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಯಶವಂತರು ವಹಿಸಿದರು. ಮುಖ್ಯ ಅತಿಥಿಗಳಾದ ಆಗಮಿಸಿದ ವಾಡ್೯ ಕೌನ್ಸಿಲರ್ ಶ್ರೀಲತಾ ಟೀಚರ್ ಸಾಧಕರನ್ನು ಅಭಿನಂದಿಸಿದರು. ಶ್ರೀ ವಸಂತಕುಮಾರ್ ಮತ್ತು ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಜಯಶ್ರೀದಿವಾಕರ್ ಶುಭಕೋರಿದರು. ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ಟಿ.ಎನ್. ಸ್ವಾಗತಿಸಿ ಶಾಲಾ ಅಧ್ಯಾ ಪಕಿ ಶೆಲಿ೯ ಮೆರೋಸ್ ವಂದಿಸಿದರು. ಅಧ್ಯಾಪಕ ಶ್ರೀ ಯಶವಂತ ಕಾಯ೯ಕ್ರಮ ನಿರೂಪಿಸಿದರು.

No comments:

Post a Comment